ನೆಚ್ಚಿನ ಸಾಹಿತಿ 'ಜಯಂತ್ ಕಾಯ್ಕಿಣಿ' ಮೊಗ್ಗಿನ ಮನಸಿಗಾಗಿ ಬರೆದ ಹಾಡಿನ ಈ ಸಾಲು ಮಾತ್ರ ಯಾಕೋ ತುಂಬ ಕಾಡುತ್ತಿತ್ತು. ಯಾವುದಾದರು ಒಬ್ಬ ಹುಡುಗ ನನ್ನೇ ನೋಡಬೇಕು, ಆ ಮಟ್ಟಿಗಾದರೂ ಯಾವುದೋ ಜೀವಿಯ ಜಗತ್ತಿನಲ್ಲಿ ತಾನು ಕೇಂದ್ರಬಿಂದುವಾಗಬೇಕು ಎಂಬ ಮೊಗ್ಗಿನ ಮನಸಿನ ಹೆಬ್ಬಯಕೆ ಎದ್ದು ಕಾಣುತ್ತೆ. ಹುಡುಗಿಯರಿಗೆ ಹೀಗೆ ಅನ್ನಿಸುವುದೋ ಇಲ್ಲವೋ ಅದು ಬೇರೆ ವಿಷಯ. ಆದರೆ ಒಂದಂತೂ ನಿಜ; ಜಗತ್ತಿನ ಪ್ರತಿಯೊಂದು ಜೀವಿಯೂ ತನ್ನೆಡೆಗೆ ಉಳಿದವರ ಗಮನ ಇರಲಿ ಅಂತಲೋ, ಸುತ್ತಲಿನ ಪರಿಸರದಲ್ಲಿ ತಾನೊಬ್ಬ important ವ್ಯಕ್ತಿ ಆಗಬೇಕು ಅಂತಲೋ, ನನ್ನಎಲ್ಲರೂ care ಮಾಡಲಿ ಅಂತಲೋ ಆಸೆ ಪಟ್ಟೇ ಪಡುತ್ತಾರೆ.
ಕೇವಲ ಒಬ್ಬ ಮನುಷ್ಯನ ಕಥೆಯಲ್ಲ ಇದು. ಉದಾಹರಣೆಗೆ, ಗಂಡು ಗೀಜಗ ಹೆಣ್ಣನ್ನು ಆಕರ್ಷಿಸಲು ಸುಂದರ ಗೂಡನ್ನ ಕಟ್ಟುತ್ತದೆ. ಆ ಗೂಡುಹೆಣ್ಣು ಗೀಜಗವನ್ನಾ impress ಮಾಡಿದರೆ ಮಾತ್ರ ಅದು ಅವನ girlfriend ಆಗಲು ಒಪ್ಪಿಕೊಳ್ಳತ್ತೆ; ಇಲ್ಲವಾದರೆ ಇನ್ನೊಂದು ಸುಂದರ ಗೂಡನ್ನ ಕಟ್ಟಿದ ಸುಂದರನ ಹತ್ತಿರ ಹಾರಿ ಹೋಗತ್ತೆ. ಆ ಗೀಜಗ ಕೂಡ ಹೀಗೆ ಹಾಡಬಹುದೇನೋ " ಎಲ್ಲಾರೂ ಕಾಡಿನಲ್ಲಿ ಅವಳನ್ನೇ ನೋಡುವಾಗ ಅವಳು ನನ್ನ ಗೂಡನ್ನೇ ನೋಡಬೇಕು!"
ಡಿ. ವಿ. ಜಿ. ಯವರು ಸುಮ್ಮನೇ ಹೇಳಲಿಲ್ಲ "ಮನ್ನಣೆಯ ದಾಹವೆಲ್ಲಕಂ ತೀಕ್ಷ್ಣ" ಅಂತ. ಹೌದು, ಅವರೇ ಹೇಳಿದಂತೆ ಅನ್ನದಾತುರ, ಚಿನ್ನದಾತುರ, ಹೆಣ್ಣು ಗಂಡೊಲವಿಗಿಂತ ತಾನೊಬ್ಬ ಗುರುತಿಸಲ್ಪಡುವ ವ್ಯಕ್ತಿ ಆಗಬೇಕು ಎಂಬ ಬಯಕೆ ಅತಿ ದೊಡ್ಡದು. ಅದಕ್ಕೇ ಹೇಳಿರಬಹುದು " एनकेन कारणेन प्रसिद्ध पुरुषों भव" ಅಂತ.
ಒಮ್ಮೆ ಹಲ್ಲು ಬಂದಿರದ ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಉದುರಿರುವ ಅಜ್ಜಂದಿರ ವರೆಗೆ ಗಮನಿಸಿ ನೋಡಿ, ತಮಗೆ ಒಂದು ಕಡೆ importance ಇಲ್ಲ ಅಂತಾದರೆ ಖಂಡಿತ ಅವರು ಸಹಿಸಿಕೊಳ್ಳಲಾರರು. ಆದರೆ ಬೇಸರದ ವಿಷಯ ಅಂದ್ರೆ, ಇದೊಂದೇ ಕಾರಣಕ್ಕೆ ನಾವದೆಷ್ಟೋ ಮುಖವಾಡಗಳನ್ನ ಹಾಕಿಕೊಂಡು ಬಿಡುತ್ತೇವೆ. ಆ ಮುಖವಾಡದ ಒಳಗೇ ಅಡಗಿ ಕುಳಿತು ಅದರ ಉರಿಯಲ್ಲಿ ಒಂದು ದಿನ ನಾವೇ ಬೆಂದು ಹೋಗುತ್ತೇವೆ. ಛೆ!!
ಕೊನೆಯಲ್ಲಿ ಒಂದು ಮಾತು.........
ಕೇವಲ ಒಬ್ಬ ಮನುಷ್ಯನ ಕಥೆಯಲ್ಲ ಇದು. ಉದಾಹರಣೆಗೆ, ಗಂಡು ಗೀಜಗ ಹೆಣ್ಣನ್ನು ಆಕರ್ಷಿಸಲು ಸುಂದರ ಗೂಡನ್ನ ಕಟ್ಟುತ್ತದೆ. ಆ ಗೂಡುಹೆಣ್ಣು ಗೀಜಗವನ್ನಾ impress ಮಾಡಿದರೆ ಮಾತ್ರ ಅದು ಅವನ girlfriend ಆಗಲು ಒಪ್ಪಿಕೊಳ್ಳತ್ತೆ; ಇಲ್ಲವಾದರೆ ಇನ್ನೊಂದು ಸುಂದರ ಗೂಡನ್ನ ಕಟ್ಟಿದ ಸುಂದರನ ಹತ್ತಿರ ಹಾರಿ ಹೋಗತ್ತೆ. ಆ ಗೀಜಗ ಕೂಡ ಹೀಗೆ ಹಾಡಬಹುದೇನೋ " ಎಲ್ಲಾರೂ ಕಾಡಿನಲ್ಲಿ ಅವಳನ್ನೇ ನೋಡುವಾಗ ಅವಳು ನನ್ನ ಗೂಡನ್ನೇ ನೋಡಬೇಕು!"
ಡಿ. ವಿ. ಜಿ. ಯವರು ಸುಮ್ಮನೇ ಹೇಳಲಿಲ್ಲ "ಮನ್ನಣೆಯ ದಾಹವೆಲ್ಲಕಂ ತೀಕ್ಷ್ಣ" ಅಂತ. ಹೌದು, ಅವರೇ ಹೇಳಿದಂತೆ ಅನ್ನದಾತುರ, ಚಿನ್ನದಾತುರ, ಹೆಣ್ಣು ಗಂಡೊಲವಿಗಿಂತ ತಾನೊಬ್ಬ ಗುರುತಿಸಲ್ಪಡುವ ವ್ಯಕ್ತಿ ಆಗಬೇಕು ಎಂಬ ಬಯಕೆ ಅತಿ ದೊಡ್ಡದು. ಅದಕ್ಕೇ ಹೇಳಿರಬಹುದು " एनकेन कारणेन प्रसिद्ध पुरुषों भव" ಅಂತ.
ಒಮ್ಮೆ ಹಲ್ಲು ಬಂದಿರದ ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಉದುರಿರುವ ಅಜ್ಜಂದಿರ ವರೆಗೆ ಗಮನಿಸಿ ನೋಡಿ, ತಮಗೆ ಒಂದು ಕಡೆ importance ಇಲ್ಲ ಅಂತಾದರೆ ಖಂಡಿತ ಅವರು ಸಹಿಸಿಕೊಳ್ಳಲಾರರು. ಆದರೆ ಬೇಸರದ ವಿಷಯ ಅಂದ್ರೆ, ಇದೊಂದೇ ಕಾರಣಕ್ಕೆ ನಾವದೆಷ್ಟೋ ಮುಖವಾಡಗಳನ್ನ ಹಾಕಿಕೊಂಡು ಬಿಡುತ್ತೇವೆ. ಆ ಮುಖವಾಡದ ಒಳಗೇ ಅಡಗಿ ಕುಳಿತು ಅದರ ಉರಿಯಲ್ಲಿ ಒಂದು ದಿನ ನಾವೇ ಬೆಂದು ಹೋಗುತ್ತೇವೆ. ಛೆ!!
ಕೊನೆಯಲ್ಲಿ ಒಂದು ಮಾತು.........
ಜಾತ್ರೆಯಲ್ಲಿ ತೇರನ್ನ ನೋಡೋದು ಬಿಟ್ಟು ನಿಮ್ಮನ್ನ ನೋಡುತ್ತಿರುವ ಕಣ್ಣುಗಳನ್ನ ಹುಡುಕಲು ಹೋಗಿ ನೀವು ತೇರು ನೋಡೋದನ್ನ mis ಮಾಡಿಕೊಳ್ಬೇಡಿ..for your kind information,
netನಲ್ಲಿ ಯಾರ್ಯಾರೋ ಏನೇನೋ ನೋಡುವಾಗ
ನೀವು ನನ್ನ blogನ್ನೇ ನೋಡಬೇಕು.............
Superb man... thats realy true.
ReplyDeleteTHANK YOU
ReplyDeleteತುಂಬಾ ಚೆನ್ನಾಗಿದೆ...ಬರಹ ಮನಸನ್ನು ಶುಧ್ದಿಗೊಳಿಸುವ ಸಾಧನಗಳಲ್ಲೊಂದು...ಹಾಗಾಗಿ ಬರವಣಿಗೆ ನಿರಂತರವಾಗಿರಲಿ...
ReplyDeleteI wish you all the best............