ನಿವೇದನೆ

ಭಾವನೆಗಳೂ ಎಂದಿಗೂ ಶಾಶ್ವತವಲ್ಲ....ಆದರೂ ಯಾವ ಭಾವಕ್ಕೆ ಸಾವಿಲ್ಲ ಅನ್ನಿಸಿತೋ ಅದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ....ಈ ಭಾವಕ್ಕೆ ಜನಿಸಿದ ಕೂಸುಗಳೆಲ್ಲವೂ ಸುಂದರ, ಸಧೃಡ ಎನ್ನಲಾರೆ.... ಆದರೆ ಯಾವುದೂ ಸಮಯಕ್ಕೆ ಮೊದಲೆ ಹುಟ್ಟಿದ ಅಥವಾ ಸತ್ತು ಹುಟ್ಟಿದ ಕೂಸುಗಳಲ್ಲ....

Tuesday, May 26, 2009

ಸ್ವರ್ಗಾ ಮಗಾ ಸ್ವರ್ಗಾ, ಆದರೆ......

"ಆಹಾ, ಮನೆಯ ಮುಂದೆ ಹಸಿರು ಗುಡ್ಡ, ಹಿಂದೆ ಅಡಿಕೆ ತೋಟ, ಅಲ್ಲೇ ಹರಿಯೋ ಹೊಳೆ, ವರ್ಷದ ಆರು ತಿಂಗಳು ಜಿನುಗೋ ಮಳೆ, pure environment, hill station ಥರ ಇರೋ ಮನೆ, ಸುತ್ತಲೂ ವನರಾಜಿ.....ಹೆಬ್ಬಾರ ಸ್ವರ್ಗ ಕಣೋ ಸ್ವರ್ಗ....."

ನನ್ನ ಗೆಳೆಯರನ್ನ ಉತ್ತರ ಕನ್ನಡದ ಪ್ರಕೃತಿ ಸೌಂದರ್ಯವನ್ನ ಉಣಿಸಲು ಕಳೆದ ಮಳೆಗಾಲದಲ್ಲೇ ನಮ್ಮೂರಿಗೆ ಕರೆದುಕೊಂಡು ಹೋಗಿದ್ದಾಗ ಬಂದ ಮಾತುಗಳಿವು. ಆದರೆ ಇಷ್ಟೆಲ್ಲಾ ಹೇಳಿದ ಮೇಲೆ ಕೊನೆಯಲ್ಲಿ ಅವರ ಬಾಯಲ್ಲಿ ಬಂದಿದ್ದು 'ಆದರೆ.....' ಅನ್ನೋ ಪದ.

"
ಆದರೆ.....
ರಾತ್ರಿಯಲ್ಲೋ, ಮನೆಯಲ್ಲಿ ಯಾರೂ ಇರದಿರುವಾಗಲೋ ಏನಾದರೂ ಆದರೆ ಏನು ಮಾಡಬೇಕು? ಹತ್ತಿರದಲ್ಲಿ ಒಂದು ಆಸ್ಪತ್ರೆಯಿಲ್ಲ, ಸತ್ತೆ ಎಂದು ಕೂಗಿದರೆ ಕೇಳಿಸವಷ್ಟು ಹತ್ತಿರದಲ್ಲೂ ಮನೆಗಳಿಲ್ಲ; ಆಟೋ ಎಂದೋ ಕೂಗಿದ ಕೂಡಲೇ ಬರುವಂಥ ವಾಹನಗಳಿಲ್ಲ; ಬೇಸರ ಬಂದಾಗ ಸಿನೆಮಾ ನೋಡಬೇಕು ಅನ್ನಿಸಿದರೆ 30 ಕಿಲೋಮೀಟರ್ ದೂರಕ್ಕೆ ಹೋಗಬೇಕು....ಹ್ಯಾಗೋ ಬದ್ಕ್ತೀರ ಇಲ್ಲಿ? ಪಿಕ್ನಿಕ್ ಗೆ ಒಳ್ಳೆ place ಅಷ್ಟೇ, ಬದುಕೊದಕ್ಕಲ್ಲ ಕಣೋ....

ಅವರಿಗೆ ಇಂದು ನಾವು ಬದುಕುತ್ತ ಇರೋ ರೀತಿನೇ ವಿಚಿತ್ರ, ಭಯಂಕರ ಅನ್ನಿಸಿದರೆ ನಮ್ಮ ಹಿಂದಿನವರು ಇದ್ದರಲ್ಲ; ಎಲ್ಲಿಂದಲೋ ಬಂದು ಕಾಡಿನ ಮಧ್ಯೆ ಮನೆ ಮಾಡಿದರಲ್ಲ ಆಗಿನ ಸ್ಥಿತಿ ನೋಡಿದರೆ ಇನ್ನೇನೆನಿಸಬಹುದು? ಹೌದು, ಹವ್ಯಕರ ಮೂಲ ಉತ್ತರ ಭಾರತ ಅನ್ನೋ ಅಭಿಪ್ರಾಯ ತುಂಬಾ ಜನರಲ್ಲಿ ಇದೆ. ಬಹುಶಃ ಯಾವುದೋ ಮುಸ್ಲಿಂ ರಾಜನ ಆಳ್ವಿಕೆಯ ದಬ್ಬಾಳಿಕೆಯನ್ನ ತಡೆಯಲಾಗದೆ ಇಲ್ಲಿಗೆ ಓಡಿ ಬಂದು ಬದುಕು ಹೂಡಿರಬೇಕು; ಯಾಕೆಂದರೆ ರಾಜರುಗಳ ಅಭಿಪ್ರಾಯ ಜುಟ್ಟುದಾರರನ್ನ ಮತಾಂತರ ಮಾಡಿದರೆ ಇಡೀ ಹಿಂದೂ ಧರ್ಮವನ್ನೇ ಮತಾಂತರಿಸಬಹುದು ಎಂಬುದಾಗಿತ್ತು. ಆದರೆ ಹಾಗೆ ಓಡಿ ಬಂದವರು ನೆಲೆಸಿದ್ದದರೂ ಎಲ್ಲಿ? ರಾಜರಿರಲಿ ಸೂರ್ಯನ ಕಿರಣಗಳಿಗೆ ಪತ್ತೆ ಹಚ್ಚಲಾಗದಂಥ ಕಾಡುಗಳು....ಆಹಾ, ಮತ್ತಿಘಟ್ಟ, ಕಳಚೆ ಅಂಥ ಜಾಗೆಗಳನ್ನ ಇಂದು ನೋಡಿದರೆ ಏನು ಪ್ರಕೃತಿ ಸೌಂದರ್ಯವಪ್ಪಾ ಎಂದು ಹುಬ್ಬೇರಿಸಬಹುದಷ್ಟೇ. ಆದರೆ ಅಂದು ಅದು ಹೇಗೆ ಅಂಥ ಕಗ್ಗಾಡಿನಲ್ಲಿ ಬದುಕಿದರೋ! ರೋಗಗಳು ಬಂದಾಗ, ಗರ್ಭಿಣಿ-ಬಾಣಂತಿ-ಚಿಕ್ಕ ಚಿಕ್ಕ ಮಕ್ಕಳನ್ನ ಅದು ಹ್ಯಾಗೆ ನೋಡಿಕೊಂಡರೋ!! ಅಬ್ಬಾ, ಯೊಚಿಸಿದರೇ ಮೈ ಜುಮ್ಮೆನ್ನುತ್ತದೆ.

ಅಂದಿನ ಮಾತಿರಲಿ ಇಂದಿಗೂ ಜೋರು ಮಳೆ ಸುರಿದಾಗ ನಮ್ಮನೆಹತ್ತಿರದ ಹೊಳೆ ತುಂಬಿ ಹರಿಯುತ್ತದೆ....ಆಗ ನಮಗೆ ಯಾರ ಸಂಪರ್ಕವೂ ಸಾಧ್ಯವಿಲ್ಲ. phone ಸತ್ತು ಬಿದ್ದಿರತ್ತೆ. ನಾವು ಹೋಗಲು ಸಾಧ್ಯವಾಗುವುದು ನಮ್ಮ ಪಕ್ಕದಮನೆ ಹಬ್ಬಣಮನೆಗೆ ಮಾತ್ರ. ಪಕ್ಕದ ಮನೆ ಅಂದರೆ ಕೇವಲ ಮುಕ್ಕಾಲು ಕಿಲೋಮೀಟರ್ ದೂರ. ಅವರ ಮನೆಯದು ಇದೇ ಗತಿ...ನಮ್ಮೆರಡು ಮನೆಗಳದೇ ಒಂದು ಚಿಕ್ಕ ದ್ವೀಪ. ಹೀಗಿದೆ ಮತ್ತು ಹೀಗಿರಲೇಬೇಕು ಮಲೆನಾಡಿನ ಬದುಕು.....


ಸಾಧ್ಯವಾದರೆ ಜೋರು ಮಳೆಗಾಲದಲ್ಲಿ
ಒಮ್ಮೆ ಮಲೆನಾಡಿಗೆ ಬಂದು ನೋಡಿ....
ಹಲಸಿನ ಹಪ್ಪಳದೊಂದಿಂಗೆ ನಿಮ್ಮನ್ನ
ಬರಮಾದಿಕೊಳ್ಳುತ್ತೇವೆ...................


Saturday, May 9, 2009

ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ ಅವನು ನನ್ನೇ ನೋಡಬೇಕು

ನೆಚ್ಚಿನ ಸಾಹಿತಿ 'ಜಯಂತ್ ಕಾಯ್ಕಿಣಿ' ಮೊಗ್ಗಿನ ಮನಸಿಗಾಗಿ ಬರೆದ ಹಾಡಿನ ಈ ಸಾಲು ಮಾತ್ರ ಯಾಕೋ ತುಂಬ ಕಾಡುತ್ತಿತ್ತು. ಯಾವುದಾದರು ಒಬ್ಬ ಹುಡುಗ ನನ್ನೇ ನೋಡಬೇಕು, ಆ ಮಟ್ಟಿಗಾದರೂ ಯಾವುದೋ ಜೀವಿಯ ಜಗತ್ತಿನಲ್ಲಿ ತಾನು ಕೇಂದ್ರಬಿಂದುವಾಗಬೇಕು ಎಂಬ ಮೊಗ್ಗಿನ ಮನಸಿನ ಹೆಬ್ಬಯಕೆ ಎದ್ದು ಕಾಣುತ್ತೆ. ಹುಡುಗಿಯರಿಗೆ ಹೀಗೆ ಅನ್ನಿಸುವುದೋ ಇಲ್ಲವೋ ಅದು ಬೇರೆ ವಿಷಯ. ಆದರೆ ಒಂದಂತೂ ನಿಜ; ಜಗತ್ತಿನ ಪ್ರತಿಯೊಂದು ಜೀವಿಯೂ ತನ್ನೆಡೆಗೆ ಉಳಿದವರ ಗಮನ ಇರಲಿ ಅಂತಲೋ, ಸುತ್ತಲಿನ ಪರಿಸರದಲ್ಲಿ ತಾನೊಬ್ಬ important ವ್ಯಕ್ತಿ ಆಗಬೇಕು ಅಂತಲೋ, ನನ್ನಎಲ್ಲರೂ care ಮಾಡಲಿ ಅಂತಲೋ ಆಸೆ ಪಟ್ಟೇ ಪಡುತ್ತಾರೆ.


ಕೇವಲ
ಒಬ್ಬ ಮನುಷ್ಯನ ಕಥೆಯಲ್ಲ ಇದು. ಉದಾಹರಣೆಗೆ, ಗಂಡು ಗೀಜಗ ಹೆಣ್ಣನ್ನು ಆಕರ್ಷಿಸಲು ಸುಂದರ ಗೂಡನ್ನ ಕಟ್ಟುತ್ತದೆ. ಗೂಡುಹೆಣ್ಣು ಗೀಜಗವನ್ನಾ impress ಮಾಡಿದರೆ ಮಾತ್ರ ಅದು ಅವನ girlfriend ಆಗಲು ಒಪ್ಪಿಕೊಳ್ಳತ್ತೆ; ಇಲ್ಲವಾದರೆ ಇನ್ನೊಂದು ಸುಂದರ ಗೂಡನ್ನ ಕಟ್ಟಿದ ಸುಂದರನ ಹತ್ತಿರ ಹಾರಿ ಹೋಗತ್ತೆ. ಗೀಜಗ ಕೂಡ ಹೀಗೆ ಹಾಡಬಹುದೇನೋ "
ಎಲ್ಲಾರೂ ಕಾಡಿನಲ್ಲಿ ಅವಳನ್ನೇ ನೋಡುವಾಗ ಅವಳು ನನ್ನ ಗೂಡನ್ನೇ ನೋಡಬೇಕು!"


ಡಿ
. ವಿ. ಜಿ. ಯವರು ಸುಮ್ಮನೇ ಹೇಳಲಿಲ್ಲ "
ಮನ್ನಣೆಯ ದಾಹವೆಲ್ಲಕಂ ತೀಕ್ಷ್ಣ" ಅಂತ. ಹೌದು, ಅವರೇ ಹೇಳಿದಂತೆ ಅನ್ನದಾತುರ, ಚಿನ್ನದಾತುರ, ಹೆಣ್ಣು ಗಂಡೊಲವಿಗಿಂತ ತಾನೊಬ್ಬ ಗುರುತಿಸಲ್ಪಡುವ ವ್ಯಕ್ತಿ ಆಗಬೇಕು ಎಂಬ ಬಯಕೆ ಅತಿ ದೊಡ್ಡದು. ಅದಕ್ಕೇ ಹೇಳಿರಬಹುದು " एनकेन कारणेन प्रसिद्ध पुरुषों भव" ಅಂತ.


ಒಮ್ಮೆ
ಹಲ್ಲು ಬಂದಿರದ ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಉದುರಿರುವ ಅಜ್ಜಂದಿರ ವರೆಗೆ ಗಮನಿಸಿ ನೋಡಿ, ತಮಗೆ ಒಂದು ಕಡೆ
importance ಇಲ್ಲ ಅಂತಾದರೆ ಖಂಡಿತ ಅವರು ಸಹಿಸಿಕೊಳ್ಳಲಾರರು. ಆದರೆ ಬೇಸರದ ವಿಷಯ ಅಂದ್ರೆ, ಇದೊಂದೇ ಕಾರಣಕ್ಕೆ ನಾವದೆಷ್ಟೋ ಮುಖವಾಡಗಳನ್ನ ಹಾಕಿಕೊಂಡು ಬಿಡುತ್ತೇವೆ. ಮುಖವಾಡದ ಒಳಗೇ ಅಡಗಿ ಕುಳಿತು ಅದರ ಉರಿಯಲ್ಲಿ ಒಂದು ದಿನ ನಾವೇ ಬೆಂದು ಹೋಗುತ್ತೇವೆ. ಛೆ!!


ಕೊನೆಯಲ್ಲಿ
ಒಂದು ಮಾತು.........
ಜಾತ್ರೆಯಲ್ಲಿ ತೇರನ್ನ ನೋಡೋದು ಬಿಟ್ಟು ನಿಮ್ಮನ್ನ ನೋಡುತ್ತಿರುವ ಕಣ್ಣುಗಳನ್ನ ಹುಡುಕಲು ಹೋಗಿ ನೀವು ತೇರು ನೋಡೋದನ್ನ mis ಮಾಡಿಕೊಳ್ಬೇಡಿ.


for your kind information,

netನಲ್ಲಿ ಯಾರ್ಯಾರೋ ಏನೇನೋ ನೋಡುವಾಗ
ನೀವು ನನ್ನ blogನ್ನೇ ನೋಡಬೇಕು.............


.

Friday, May 8, 2009

ನಾವು ಹುಡುಗರು ಹೀಗೇ ಕಣ್ರೀ

"ಅವ್ಳು ನನ್ನ ಲವ್ ಮಾಡ್ತಾ ಇದಾಳೆ ಅನ್ನಿಸ್ತಿದ್ಯೋ"
ನನ್ನ ಗೆಳೆಯ ಬಂದು ಹೀಗೆ ಹೇಳಿದಾಗ ಕೇಳಿದೆ "ಅದು ಹ್ಯಾಗೆ ಹೇಳ್ತೀಯ?" ಅಂತ.
"ಹೌದೋ ಅವಳು ನನ್ನ ಜತೆ ಆಡೋ ರೀತಿ ನೋಡಿದ್ರೆ ಹಾಗೇ ಅನ್ನಿಸ್ತಾ ಇದ್ಯೋ"
"ಯಾಕೆ ಹಾಗೆಲ್ಲ ಅಂದ್ಕೊತೀಯ ಅದು ಬರೇ ಫ್ರೆಂಡ್ಶಿಪ್ ಇದ್ದಿರಬಹುದೋ"
"ಇಲ್ಲ ಕಣೋ ಅವಳು ನನ್ನ ಹತ್ತಿರ ಮಾತ್ರ ಥರ ನಡೆದು ಕೊಳ್ತಾಳೆ. ಬೇರೆ ಮಾತೆ ಇಲ್ವೋ ಅವ್ಳು ನನ್ನೇ ಲವ್ ಮಾಡ್ತಾಇರೋದು"

ಅಂಥದ್ದೊಂದು ಭ್ರಮೆ ಅವನಲ್ಲಿ ಹುಟ್ಟಿ ಬಿಟ್ಟಿತ್ತು. ಆದರೆ ಅವಳೇ ತನ್ನ ಪ್ರಿಯತಮನ ಇವನಿಗೆ ಪರಿಚಯಿಸುವುದರೊಂದಿಗೆ ಅದು ಸತ್ತಿತು ಕೂಡ. ಅದಕ್ಕೆ ನಾನು ಹೇಳಿದ್ದು ಮತ್ತು ನನಗೆ ಅನ್ನಿಸಿದ್ದು 'ನಾವು ಹುಡುಗರೇ ಹೀಗೆ' ಅಂತ.
ಯಾರೋ ಒಬ್ಬಳು ಒಂದೊಳ್ಳೆ smile ಕೊಟ್ಟರೆ ಸಾಕು.......ಕೆಂಪಿರುವೆ ಗೂಡು ಮೈಮೇಲೆ ಬಿದ್ದಂತೆ ಆಡುತ್ತೇವೆ. ಹುಡುಗಿಯೊಬ್ಬಳು lovely ಅನ್ನೋವಂಥ message ಅನ್ನಾ ಅವಳ friends groupಗೇ forward ಮಾಡಿರ್ತಾಳೆ. ಆದರೆ ಇವಮಾತ್ರ "ನಂಗೇ ಯಾಕೆ ಥರ message ಮಾಡಿದಾಳೆ?" ಅಂತ ಯೋಚನೆಗೆ ಶುರು ಇಡ್ತಾನೆ. ಭವಿಷ್ಯ ಹೇಳ್ತೀನಿ ಕೈ ಕೊಡು ಅನ್ನುತ್ತಾ "ನಿನ್ನ ಹೆಂಡತಿ ತುಂಬ ಪುಣ್ಯವಂತೆ" ಅಂದಿರ್ತಾಳೆ ಕೇವಲ ಸ್ನೇಹದ ಸಲುಗೆಯಿಂದ. ಅದನ್ನಿವ, "ನಾನೇ ನಿನ್ನ ಹೆಂಡತಿ" ಅಂದಳು ಅಂದ್ಕೊತಾನೆ.

ಒಮ್ಮೆ ಯೋಚನೆ ಕೂಡ ಮಾಡುವುದಿಲ್ಲ.........
ನಾನ್
ಅವಳನ್ನ ಪ್ರೀತಿಸಲು ಅರ್ಹನಾ? ನನ್ನಂಥವನ ಅವಳು ಇಷ್ಟ ಪಡ್ತಾಳ? (ಪ್ರೀತಿಸೋ ಹೃದಯಗಳಿಗೆ ಇಂಥವುಗಳ ಹಂಗು ಇರುವುದಿಲ್ಲ ಅನ್ನೋದು ನಿಜ..ಆದರೂ)
ತಾನು
ಬೆಳ್ಳಿ i love
you ಅಂದ್ರೆ ಅವಳು ಕರಿಯ i love you ಅಂತಾಳ? (ಸುಂದರಿಯನ್ನ ಪ್ರೀತಿಸೋನು ಸುಂದರನೇ ಆಗಬೇಕು ಅಂತೇನೂ ಇಲ್ಲ..ಆದರೂ)
ಇವಳನ್ನ love
ಮಾಡಿದ್ರೆ ಮುಂದೆ ಎಲ್ಲ ಸಲೀಸಾಗಿ ನಡೆದೀತ? (ಇವಕ್ಕೆಲ್ಲ ಹೆದರಿ ಕುಳಿತರೆ ಯಾರು love ಮಾಡಲಾರಾರರು..ಆದರೂ)


ಇಂಥವೆಲ್ಲ ಭ್ರಮೆಗಳು ನಮ್ಮಂಥ ಹುಡುಗರಿಗೆ ಯಾಕೆ ಕಾಡ್ತಾವೆ ಅಂತ ಗೊತ್ತಿಲ್ಲ. ಆದರೆ ಇವಕ್ಕೆ ಒಂದು ಶುದ್ಧ ಸ್ನೇಹ ಸಂಬಧವನ್ನ ಹಾಳು ಮಾಡುವ ತಾಕತ್ತಿರತ್ತೆ. ಇಂಥವೇ ಭ್ರಮೆಗಳ ಮಧ್ಯೆ ಸಿಲುಕಿದ ಹುಡುಗ ಒಂದು ದಿನ ಅವಳ ಎದುರು ನಿಂತು " ನಂಗೊತ್ತು. ನೀನು ನನ್ನ love ಮಾಡ್ತಾ ಇದೀಯ ಅಂತ i love you ಕಣೇ" ಅಂತಾನೆ. ಅವಳು "ಅಯ್ಯೋ! ಅಣ್ಣ ತಮ್ಮ ಇಲ್ಲದ ನಾನು ನಿನ್ನನ್ನೇ 'ಅಣ್ಣ' ಅಂದುಕೊಂದಿಡ್ನಲ್ಲೋ" ಅಂತಾಳೆ. ಕ್ಷಣದಿಂದ ಒಂದು ಸುಂದರ ಸ್ನೇಹ ಸತ್ತು ಕೊಳೆತು ನಾರಲು ಶುರುವಾಯಿತು ಅಂತಾನೆ ಅರ್ಥ.

ರವಿ ಬೆಳಗೆರೆ ಹೇಳಿದ ಮಾತು ನೆನಪಾಗತ್ತೆ..... ಒಂದು ಸಾರಿ i love you ಅಂದ ಮೇಲೆ, ಅದೆಷ್ಟೇ ಬಾರಿ ಮೊದಲಿನ ಥರಾನೆ friends ಆಗಿ ಇರೋಣ ಅಂದರೂ ಊಹೂಂ ಸಾಧ್ಯವಿಲ್ಲ. ಸ್ನೇಹ ಎಂಬ ಪುಟ್ಟ ಚಿಗುರಿಗೆ ದೊಡ್ಡ ಕೊಡಲಿ ಏಟು ಬಿದ್ದಿರುತ್ತೆ.



ಆದರೆ
ಒಂದಂತೂ ನಿಜ
ನಾವು ಹುಡುಗರು ಎಂದೂ ಹೀಗೇ
ನೀವೇನಂತೀರಾ?